ನಿರ್ದೇಶಕ ಚಂದ್ರಹಾಸ ಅವರು ಒಂದು ನೈಜವಾದ ಸ್ಲಮ್ ಅನ್ನು ಆಯ್ಕೆ ಮಾಡಿಕೊಂಡು ನಾಯಕ ಹಾಗೂ ನಾಯಕಿಯ ನಡುವಿನ ಪ್ರೇಮದ ಶುರುವಾಟವನ್ನು ಇತ್ತೀಚಿಗೆ ಚಿತ್ರೀಕರಿಸಿಕೊಂಡರು ‘ಧಂದೆ ಬಾಯ್ಸ್’ ಚಿತ್ರಕ್ಕಾಗಿ.
ಧಂದೆ ಬಾಯ್ಸ್....ಹಿಂದಿಲ್ಲ ಮುಂದಿಲ್ಲ ಅನ್ನುವ ಸಿನೆಮಕ್ಕೆ ಕ್ರೈಂ, ಸೆಂಟಿಮೆಂಟ್ ಹಾಗೂ ಯುವಕರಲ್ಲಿ ರಾತ್ರೋ ರಾತ್ರಿ ಶ್ರೀಮಂತನಾಗಬೇಕು ಎಂಬ ಹಂಬಲವನ್ನು ಕಥಾ ಹಂದರದಲ್ಲಿ ತಂದಿದ್ದಾರೆ. ಇದರಲ್ಲಿ ಸಂದೇಶವೇನು ಇಲ್ಲ, ಬಿರುಸಾದ ವೇಗದಲ್ಲಿ ಚಲಿಸುವ ಚಿತ್ರ ಹಳ್ಳಿ ಇಂದ ಬಂದ ಹುಡುಗರು ಸಿಟಿ ಅಲ್ಲಿ ಇರುವ ಡಾನ್ ಅನ್ನು ಮುಗಿಸಿ ತಾವು ಆ ಸ್ಥಾನವನ್ನು ಆಕ್ರಮಿಸುವ ಹಂಬಲ ಹೊತ್ತಿದ್ದಾರೆ. ಈ ಯುವಕರ ದಂಡೆ ಗುರುರಾಜ್, ಮಾದೇಶ್ ಹಾಗೂ ಹೇಮಂತ್. ಜೊತೆಗೆ ಶರತ್ ಲೋಹಿತಾಶ್ವ, ಪೊನ್ನಂಬಲ, ರಾಜ್ ಬಹದ್ದೂರ್ ಸಹ ತಾರಾಗಣದಲ್ಲಿ ಇದ್ದಾರೆ.
ನಿರ್ಮಾಪಕ ಪ್ರಕಭಾಕರ್ (ಹಿಂದೆ ಇವರು ಪ್ರಭಾಕರ್ ರೆಡ್ಡಿ ಆಗಿ ‘ಸಂಸಾರದಲ್ಲಿ ಗೋಲ್ಮಾಲ್’ ಸಿನೆಮಾ ತಯಾರಿಸಿದ್ದರು. ಚಿತ್ರಕ್ಕೆ ನಾಯಕಿಯನ್ನು ಕಾಫೀ ಡೇ ಅಲ್ಲಿ ಸಂದರ್ಶನ ಮಾಡಿ ಆಯ್ಕೆ ಮಾಡಿದ್ದಾರೆ. 130 ಹೊಸ ಹುಡುಗಿಯರನ್ನು ಬೇಟಿ ಮಾಡಿ ಕೊನೆಗೆ ತನುಜ ಅವರನ್ನು ಆಯ್ಕೆ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಸೌಜನ್ಯ ವೇಶ್ಯೆ ಪಾತ್ರವನ್ನು ಮಾಡುತ್ತಿದ್ದಾರೆ.
ಎಲ್ ಪಿ ಪ್ರೊಡಕ್ಷನ್ ಲಾಂಛನದಲ್ಲಿ ಲಕ್ಷ್ಮಿನಾರಾಯಣ ಸೋನಿ ಅರ್ಪಿಸುವ ಎ ಪ್ರಭಾಕರ ಅವರ ನಿರ್ಮಾಣದ, ಶ್ವೇತ ವಿ ಅವರ ಸಹ ನಿರ್ಮಾಣದ ಚಿತ್ರ 'ದಂಧೆ ಬಾಯ್ಸ್'...ಇವ್ರಿಗೆ ಹಿಂದಿಲ್ಲ... ಮುಂದಿಲ್ಲ... ನಾಲ್ಕು ನಿಮಿಷಗಳ ಟ್ರೈಲರ್ ಸಹ ಅನಾವರಣ ಆಗಿದೆ.
ಈ ಹಿಂದೆ 'ಕುಂಭ ರಾಶಿ' ಸಿನಮ ನಿರ್ದೇಶನ ಮಾಡಿದ್ದ ಚಂದ್ರಹಾಸ್ ಅವರು ಈ ಚಿತ್ರವನ್ನೂ 35 ದಿವಸಗಳಲ್ಲಿ ಮಾತಿನ ಭಾಗವನ್ನು ಚಿತ್ರೀಕರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಮೊದಲನೇ ಹಂತದಲ್ಲಿ ಬೆಂಗಳೂರು, ಮೈಸೂರು ಹಾಗೂ ಮಾಲೆ ಮಾದೇಶ್ವರ ಬೆಟ್ಟ ಚಿತ್ರೀಕರಣವಾಗುವ ಸ್ಥಳಗಳು. ಎರಡನೇ ಹಂತದಲ್ಲಿ ಸಾಹಸ ಹಾಗೂ ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣ ಎಂಬುದು ಅವರ ಯೋಜನೆ.
ಪ್ರಮುಖ ನಾಯಕ ಈ 'ದಂಧೆ ಬಾಯ್ಸ್' ಅಲ್ಲಿ ಗುರುರಾಜ್ ಜಗ್ಗೇಶ್. ಇವರ ಜೊತೆ ಹೇಮಂತ್ ಹಾಗೂ ಮಾದೇಶ್ ಇನ್ನಿಬ್ಬರು ನಾಯಕರು. ಮಾಲೆ ಮಾದೇಶ್ವರ ಬೆಟ್ಟದಲ್ಲಿ ಹುಟ್ಟಿದ ಮೂರು ಯುವಕರುಗಳಿಗೆ ಗುರಿ ಇದೆ ಆದರೆ ಸಾಧನೆಗೆ ಅವರು ಹಿಡಿಯುವ ಮಾರ್ಗ ಬೇರೆ.
ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ, ಶ್ರೀವತ್ಸ ಅವರು ಐದು ಹಾಡುಗಳಿಗೆ ಸಂಗೀತ, ಪಿ ಎಲ್ ರವಿ ಅವರ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಅವರ ಸಂಕಲನ, ಉಮೇಶ್, ಚಾಮರಾಜ್ ಹಾಗೂ ರಾಮು ಅವರ ನೃತ್ಯ ನಿರ್ದೇಶನ ಒದಗಿಸಲಿದ್ದಾರೆ.